ಆರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ಮನ್ಸೂರ್ ಹಾಗೂ ಮುತ್ತುರಾಜು ಅವರು ನಿರ್ಮಿಸಿರುವ ‘ಅರ್ಜುನ‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರದ ಪ್ರಮುಖ ಪಾತ್ರದಲ್ಲಿ ದೇವರಾಜ್ ಹಾಗೂ ಪ್ರಜ್ವಲ್ದೇವರಾಜ್ ಅಭಿನಯಿಸಿದ್ದಾರೆ. ಇಬ್ಬರೂ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ಭಾಮ, ಕಡ್ಡಿಪುಡಿ ಚಂದ್ರು, ಗಿರೀಶ್, ರಮೇಶ್ಭಟ್, ರಾಜಶೇಖರ್ನಾಯ್ಡು, ‘ಪ್ರೀತಿ ಗೀತಿ ಇತ್ಯಾದಿ‘ ಚಿತ್ರದ ನಿರ್ಮಾಪಕ ವಿಜಯ್ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ಜನ್ಯ ಸಂಗೀತ ನೀಡಿದ್ದಾರೆ. ಕುಮರನ್ ಛಾಯಾಗ್ರಹಣ, ಸರವಣ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನ ‘ಅರ್ಜುನ‘ ಚಿತ್ರಕ್ಕಿದೆ.